jump to navigation

ಚೇತನಾ ಕಾತ್ತಿರುಂದಾಳ್.. May 9, 2008

Posted by magiccaarpet in dailogue.
add a comment

ನಂದೊಂದು ಸಿನೆಮಾ ಕಳೆದುಹೋಗಿದೆ. ಗುಜರಾಥಿ ಸಿನೆಮಾ. ಹೆಸರು ಇತ್ಯಾದಿ ಗೊತ್ತಿಲ್ಲ. ಪರಮೇಶ್ ಗುರು ಸ್ವಾಮಿಯವರು ಸಹಾಯ ಮಾಡುವರೇ?
ಅದು ಸಮಾಜದ ಮೇಲು- ಕೀಳುಗಳನ್ನ ಬಹಳ ತಣ್ಣಗೆ ಹಿಡಿದಿಟ್ಟ ‘ಪ್ರಶಸ್ತಿ ಪುರಸ್ಕೃತ’ ಚಿತ್ರ. ಅದಕ್ಕೆ ಎರಡೆರಡು ಅಂತ್ಯಗಳಿದ್ದು ಯಾವುದನ್ನು ಬೇಕಾದರೂ ನಾವು ಆಯ್ದುಕೊಳ್ಳಬಹುದಿತ್ತು.
ಸಿನೆಮಾ ನೆನಪು ಹೀಗೆ ಅಸ್ಪಷ್ಟವಾಗಿದೆ. ಇವಳದ್ದೆಲ್ಲ ಹಳೆ ಕಥೆಗಳೇ ಅಂದ್ಕೊಳ್ಬೇಡಿ, ಅದನ್ನ ನಾನು ನೋಡಿ ಹದಿನಾರು- ಹದಿನೇಳು ವರ್ಷಗಳಾದ್ವು!

ಅದು ಹೀಗಿದೆ.
ರಾಜಕೀಯ ಕುತಂತ್ರಕ್ಕೆ ಸಿಕ್ಕ ರಾಜ ಮನೆತನದ ಶಿಶು ಅಂತ್ಯಜರ (ಈ ಪದ ಪ್ರಯೋಗ ಕೂಡ ತಪ್ಪು. ಬೇರೆ ಸಿಗುತ್ತಿಲ್ಲ, ಯಾರಾದರೂ ಸಹಾಯ ಮಾಡಿ ಪ್ಲೀಸ್) ಪ್ರಾಂತ್ಯ ಸೇರುತ್ತದೆ. ಅಲ್ಲಿನ ಜನ ಸೊಂಟಕ್ಕೆ ಪೊರಕೆ ಸಿಕ್ಕಿಸ್ಕೊಂಡು ಓಡಾಡ್ತಿರ್ತಾರೆ. ಈ ಮಗು ಬೆಳೀತಾ ಬೆಳೀತಾ ತಾನು ಇವರ ನಡುವಿನವನಲ್ಲ ಅಂತ ಭಾವಿಸ್ತಾ ತನ್ನ ಬೇರನ್ನ ಹುಡುಕ್ತಲೇ ಇರುತ್ತೆ… ಕಾಯುತ್ತಲೇ ಆತ ಯುವಕನಾಗ್ತಾನೆ…. ಹೀಗೆ ಸಾಗತ್ತೆ ಸಿನೆಮಾ. ಆದ್ರೇನು ಮಾಡ್ಲಿ? ಕಥೆ ಪೂರ್ತಿ ನೆನಪಿಲ್ಲ. ಸೊಂಟಕ್ಕೆ ಪೊರಕೆ…. ಗಣ್ಯ, ಮೇಲ್ಜಾತಿ ಅಂತೆಲ್ಲ ಅನಿಸಿಕೊಂಡ ಪ್ರಾಣಿಗಳು ಬಂದಕೂಡಲೆ ಅವರೆಲ್ಲ ಅಡಗಿಕೊಳ್ಳೋದು, ಈತ ಪ್ರತಿಭಟಿಸೋದು… ಒಂದು ಅಂತ್ಯದಲ್ಲಿ ಆತ ರಾಜಕುಮಾರ ಅಂತ ಗೊತ್ತಾಗಿ ಆತನನ್ನ ಸ್ವೀಕರಿಸಿ ರಾಜ ಮಾಡೋದು, ಮತ್ತೊಂದು ಅಂತ್ಯದಲ್ಲಿ ಆತನನ್ನ ವಾಪಸು ಸ್ವೀಕರಿಸಲಾಗದೆ ಬಾವಿಗೆ ತಳ್ಳೋದು… ಅದರಲ್ಲಿ ನಂಗೆ ಬಾವಿಗೆ ತಳ್ಳೋದೇ ವಾಸ್ತವ ಅನಿಸಿ ಅತ್ತುಬಿಟ್ಟಿದ್ದು…. ಇಷ್ಟು ಮಾತ್ರ ನೆನಪಿದೆ.
ಯಾಕೋ ಗೊತ್ತಿಲ್ಲ, ನಾನು ಆ ಸಿನೆಮಾ ಮತ್ತೆ ನೋಡಬೇಕು. ಹೊರಗೆ ಕಸ ಗುಡಿಸುವ ಅಜ್ಜಿ ಮತ್ತು ಬೂಟ್ ಕಟ್ ಪ್ಯಾಂಟು ಹಾಕ್ಕೊಂಡು ತಲೆ ತಗ್ಗಿಸಿಯೇ ಅವಳು ಗುಡಿಸಿದ ಕಸವೆತ್ತಿ ಗಾಡಿಗೆ ಹಾಕ್ಕೊಳ್ಳುವ  ಅವಳ ಮಗನನ್ನ ನೋಡಿದಾಗೆಲ್ಲ ಆ ಸಿನೆಮಾ ನೆನಪಾಗತ್ತೆ. ಇಷ್ಟಕ್ಕೂ ಅದೊಂದು ಅವಾರ್ಡ್ ಮೂವೀ. ಆದರೆ ಜನಪ್ರಿಯವಾಗಿತ್ತಾ? ಗೊತ್ತಿಲ್ಲ. ಅದರ ಹೆಸರು, ಇತ್ಯಾದಿ ಯಾರಾದರೂ ಹೇಳಬಲ್ಲರೇ?

ಕಾಯ್ತಿದ್ದೇನೆ.
ಚೇತನಾ ತೀರ್ಥಹಳ್ಳಿ

 

ಒಂದು ಸೂಫಿ ಕವಿತೆಯೇ ಸೂರ್ಯನಾಗಿ… May 9, 2008

Posted by magiccaarpet in balcony.
add a comment

ಒಂದು ಸೂಫಿ ಕವಿತೆಯೇ ಸಿನೆಮಾ ಆದ ಕಥೆ ಇದು. ಆಕೆ ಪ್ರೀತಿಯ ಬೆನ್ನಟ್ಟಿ ಹೋದಳು. ಎಲ್ಲಾ ಭಯವನ್ನು ಬದಿಗೊತ್ತಿ ಆಕೆ ಪ್ರೀತಿಯ ಮೊರೆ ಹೋದಳು. ಆ ಪ್ರೀತಿಯೇ ಆಕೆಗೆ ಬಂಧನವನ್ನು ತೊಡೆಯುವ ಧೈರ್ಯ  ಕೊಟ್ಟಿತು. ಆಕೆ ಸೂರ್ಯನಷ್ಟು ಪ್ರಜ್ವಲವಾಗಿ ಹೊಳೆದಳು.

Visit: http://www.ajitpalsingh.com/ibecomethesun/Welcome.html

Ajitpal believes in the feelings, he create so that viewer can feel how he feels. He doesn’t want to give messages, he wants to go further, he wants his viewers to spread the feelings, he thinks message kills the soul of the art, it makes it piece of propaganda. When an artist focuses on the feelings she reaches closer to becoming mother or creator and she makes sure that her creations is honest & lovable.”

Ajitpal has worked on 7 international documentary films and one feature film. 5 of these films were aired on reputed TV channels like Arte and SWR. He has directed four short films, which are widely appreciated, his film Phir Kyon Aaj? was screened at world social forum 2004 and 2005. His film Empty In Me was selected for Talent Campus 2007.

The Poem

O look at this world of varied colors

In which He came down as man
O Bullaya truth is found in the
home of the beloved
Where one leaves all conflicts behind
Seeking truth for its own sake
One finds His blessed form beautiful